Thursday, November 10, 2016

ತ.ರಾ.ಸು ರವರಿಗೆ ನಮನ

ತ.ರಾ.ಸು ರವರಿಗೆ ನಮನ



ರಾ ಸು ಬರೆದ ದುರ್ಗದ ಚರಿತೆ
ಒಂದು ಗದ್ಯರೂಪದ ಕವಿತೆ
ಅದರ ಪದಲಾಲಿತ್ಯದ ಸೋಬಗಾಯಿತೆ
ಒಂದು ಸುಂದರ ಹಂಸ ಗೀತೆ

ಈ ಚೆರಿತೆಯ ಸೊಗಸೊಂದು ಗರಿ ಬಿಚ್ಚಿದ ನವಿಲು
ಇದರ ಮೂಲಕವೇ ಅವರ ಹಿರಿಮೆ ಮುಟ್ಟಿತು ಮುಗಿಲು
ಸರಿಸಿ ದುರ್ಗದ ಇತಿಹಾಸದ ಮೇಲೆ ಕವಿದ ಇರುಳು
ಜನಮನದಿ ನೆಲೆ ಮಾಡಿತವರ ಕಂಬನಿಯ ಕುಯಿಲು

ಪದವಿಗಾಗಿ ಸುರಿಸುವರು ಏಸು ಮಂದಿ ರಕ್ತ
ರಾತ್ರಿ ಹಗಲು ಹೊಂಚು ಹಾಕುವ ಅಧಿಕಾರದ ಭಕ್ತ
ಇತಿಹಾಸದ ಪುಟಗಳನು ಮಾಡಿ ರಕ್ತ ಸಿಕ್ತ
ಇವರು ಸರ್ವಾಧಿಕಾರ ಪಡೆದ ರೀತಿ ಎಷ್ಟು ಯುಕ್ತ?

ಎಂದು ತೀರುವುದೋ ಇವರ ರಾಜ್ಯ ದಾಹ?
ಎಂದು ಕೊನೆಗಾಣುವುದೋ ಇವರ ಅಧಿಕಾರದ ಮೋಹ?
ಯಾರು ಬಿಡುವರೋ ಈ ಬಾಣಕೆ ತಿರುಗು ಬಾಣ?
ಯಾರು ಮುಡಿಪಾಗಿಡುವರೋ ದೇಶಕ್ಕಾಗಿ ತಮ್ಮ ಪ್ರಾಣ?

ಉಷೆ ಮೂಡಿ ನಿಶೆ ಓಡಿ ಕೆಂಪಾಯಿತು ಮುಗಿಲು
ಕಗ್ಗತ್ತಲ ರಾತ್ರಿ ಕಳೆದು ಮೂಡಿತು ಹೊಸ ಹಗಲು
ತಾಮಸದ ವಿರುದ್ಧ ಜ್ಯೋತಿಯ ವಿಜಯೋತ್ಸವ
ನಡಿಯುತ ಬಂದಿದೆ ಅನಾದಿಯಿಂದ ಈ ದಿನನಿತ್ಯದುತ್ಸವ।

ಈ ಪುಸ್ತಕಗಳ ಮೂಲಕ ಪಸರಿಸಿದರು ಕನ್ನಡ ಕಸ್ತೂರಿ
ಕಂಕಣ ಬದ್ಧರಾಗಿ ಬಾರಿಸಿದರು ದುರ್ಗದ ಕೋಟೆಯ ಜಯಭೇರಿ
ಮತ್ತಿ ತಿಮ್ಮಣ್ಣ ನಾಯಕರು ಕಟ್ಟಿದ ಸುಭದ್ರ ದುರ್ಗ
ಅಸ್ತಮಾನ ವಾಯಿತು ಮದಕರಿ ನಾಯಕನು ಪಡೆದಾಗ ವೀರ ಸ್ವರ್ಗ

                                   ಕಠಾರಿವೀರ

Monday, June 25, 2012

ಹತ್ತನೆಯ ಮದುವೆ ವಾರ್ಷಿಕೋತ್ಸವ


ಕಳೆದ ತಿಂಗಳು, ನನ್ನ ಭಾವ ಮೈದುನನ 10 ನೇ ಮದುವೆ ವಾರ್ಷಿಕೋತ್ಸವದ ಪ್ರಯುಕ್ತ ಒಂದು ಪುಟ್ಟ ಕವನವನ್ನು ಬರೆದಿದ್ದೆ. ಅದನ್ನೇ ಇಲ್ಲಿ ಪ್ರಸ್ತುತ ಪಡೆಸುತ್ತಿದ್ದೇನೆ.


ನಿಮ್ಮ ದಾಂಪತ್ಯ ಜೀವನಕ್ಕೀಗ ಒಂದು ದಶಕ

ಕುಡಿದಿರುವಿರಿ ಗೃಹಸ್ಥಾಶ್ರಮದ ಬೇವಿನ ರಸ ಮತ್ತು ಪಾನಕ ||


ಸುಗಮವಾಗಿ ಸಾಗಲಿ ನಿಮ್ಮೀರ್ವರ ನವೀನ ದಶಕ

ಸುಧಾಮಯಿಯಾಗಿರಲಿ ನಿಮ್ಮಯ ಭವಿಷ್ಯ, ಆಗಲಿ ನಿಮ್ಮ ಬಾಳು ಸಾರ್ಥಕ ||


ದಶಕಗಳುರುಳಿ ದಶಕಗಳು ಕಳೆದು ಹೊಡೆಯಿರಿ ನೀವಿಬ್ಬರೊಂದು ಶತಕ

ನಿಮ್ಮೀ ಶತಕದ ಪಯಣವಾಗಲಿ ನಮ್ಮೆಲ್ಲರಿಗೂ ನಿದರ್ಶಕ ||


Tuesday, October 25, 2011

"ಜನ್ಮ ದಿನದ ಶುಭಾಷಯ" - ಹೇಮಂತನಿಗೆ ಅರ್ಪಿತ

ನಾನು ನಮ್ಮ ಆಫೀಸಿಗೆ "ಕ್ಯಾಬ್" ನಲ್ಲಿ ಹೋಗ್ತೀನಿ. ನನ್ನ "ಕ್ಯಾಬ್" ಮಿತ್ರರಾದ ಹೇಮಂತು ಅವರ ಜನ್ಮದಿನಕ್ಕೆ ನಾನು ಈ ಕವನವನ್ನು ರಚಿಸಿದ್ದು.



ಜನ್ಮ ದಿನದ ಶುಭಾಷಯ

ಪ್ರೀತಿಯ ಹೇಮಂತು
ಕೇಳಿರಿ ನಮ್ಮಯ ಮನದ ತಂತು!

ಹಾರೈಸುವರು ಅರುಣಾ, ಕಿರಣ,
ತುಂಬಿರಲಿ ಬಾಳಲಿ ಹಸಿರು ತೋರಣ, ನಿತ್ಯ ಹೂರಣ!

ಹರಸುವನು ಪ್ರವೀಣ,
ಮೂಡಲಿ ಮನದಲಿ ನೂತನ ಚೇತನ!

ಹೇಳುವನು ಭರತ್,
ಸಂತಸದಿಂ ತುಂಬಿರಲಿ ನಿಮ್ಮ ಜಗತ್!

ಎನ್ನುವರು ಭಾವನಾ,
ಸದಾ ನಗುವು ಬೀರುತಿರಲಿ ನಿಮ್ಮಯ ವದನ!

ನುಡಿದರು ಮಧುರ,
ಬಾಳ ಪಯಣವಾಗಲಿ ಸುಲಲಿತ, ಸುಮಧುರ!

ಹರಸುವನು ರವಿ,
ಬದುಕಲಿ ತುಂಬಿರಲಿ ಸದಾ ಸವಿ!

ಹಾರೈಸುವನು ಶ್ರೀನಿವಾಸ,
ನಿಮ್ಮ ಬಾಳಲಿ ತುಂಬಿರಲಿ ಸಂತಸ, ಸಮರಸ!

ಹೇಳುವರು ಸುಮತಾ,
ಬರಲಿ ನಿಮಗೊಬ್ಬಳು ಮಡದಿ ಸುಸಂಸ್ಕೃತ!

ನುಡಿಯುವರು ಸುಷ್,
ಇರಲಿ ಸದಾ ನಿಮ್ಮ ದಿಲ್ ಖುಷ್!

-- ಇಂತಿ ನಿಮ್ಮ ಪ್ರೀತಿಯ
ರೂಟ್ ನಂ. ೧ ಕ್ಯಾಬಿನ ದುನಿಯಾ





- ಕಠಾರಿ ವೀರ


ವಸುಂಧರೆ - ಒಂದು ಕವನ

ವಸುಂಧರೆ

ವಸುಂಧರೆ, ಹೊರುವಳು ಜಗದ ಹೊರೆ
ತಾಯಾಗಿ ನೀಡುವಳು ಆಸರೆ
ಅಕ್ಕ ತಂಗಿಯಾಗಿ ಓಗೊಡುವಳು ನಮ್ಮಯ ಕರೆ


ಆಗುವಳು ಭಾವನೆಗಳ ಹಂಚಿಕೊಳ್ಳುವ ಸ್ನೇಹಿತೆ
ಬಾಳ ಸಂಗಾತಿಯಾಗಿ ನಡೆವಳು ಈ ವನಿತೆ


ಮಗಳಾಗಿ ಹೆಚ್ಚಿಸುವಳು ಹುಟ್ಟಿದ ಮನೆಯ ಕೀರ್ತಿ
ಸೊಸೆಯಾಗಿ ಬೆಳಗುವಳು ಮೆಟ್ಟಿದ ಮನೆಯ ಜ್ಯೋತಿ


ಎಲ್ಲಾ ಪಾತ್ರಗಳ ನಿಭಾಯಿಸಬಲ್ಲ ಶಕ್ತಿ
ಇರುವುದವಳಿಗೆ ಸಹಿಷ್ಣುತೆ, ಪಕ್ವತೆ ಮತ್ತು ಯುಕ್ತಿ
ಸಹನಶೀಲೆ ಶಾಂತ ಮೂರ್ತಿ ಎಂಬುದೇ ಲೋಕೋಕ್ತಿ


ಇವಳಲ್ಲಿ ಬೆರೆತಿರುವ ದೈವಾಂಶ
ಸಾರಿ ಹೇಳುತಿಹುದು ಈ ಪದ್ಯದ ಸಾರಾಂಶ!






- ಕಠಾರಿ ವೀರ

"ನಮ್ಮ ಮನೆ ಅಂಗಳದಿ" ಭಾವಗೀತೆಯ ಸಾಹಿತ್ಯ

ನಾನು ಈ ಕವನ/ಭಾವಗೀತೆನ ಬಹಳ ದಿನಗಳಿಂದ ಹುಡುಕ್ತಿದ್ದೆ. ಇಗೋ, ಇದರ ಸಾಹಿತ್ಯ ಹೀಗಿದೆ. ಇದರ ಸಾಹಿತಿಗಳು - ವೀಸೀ (ಅಂದರೆ ವೀ ಸೀತಾರಾಮಯ್ಯ ನವರು):

19-08-2012: ಈ ಕವನವು ಇನ್ನು ಒಂದು ತಾಣದಲ್ಲಿ ದೊರೆಯಿತು - ಅದಕ್ಕೆ ಇಲ್ಲಿ ಕ್ಲಿಕ್ಕಿಸಿ. kannadalyrics.com ಅವರಿಗೂ ನನ್ನ ಅನಂತ ಧನ್ಯವಾದಗಳು.

ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು

 
ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು
ಕೊಳ್ಳೀರೀ ಮಗುವನ್ನು ಎಮ್ಮ ಮನೆ ಬೆಳಕನ್ನು ನಿಮ್ಮ ಮನೆಯನ್ನು ತುಂಬಲೊಪ್ಪಿಸುವೆವು

ಮರೆಮೋಸ ಕೊಂಕುಗಳನರಿಯಳಿವಳು ಇನಿಸ ವಿಶ್ವಾಸವನು ಕಂಡರಿಯಳು
ಕಷ್ಟಗಳ ಸಹಿಸದೆಯೆ ಕಾಣದೆಯೇ ಬೆಳೆದವಳು ಸಲಹಿಕೊಳಿರಿಮಗಳ ಓಪ್ಪಿಸುವೆವು

ನಿಮಗಿವಳು ನೀಡುತಿಹ ಹಾಲು ಹಣ್ಣುಗಳ ಸವಿ ಎಂದೆದೂ ಅವಳ ನಡೆ ನಿಮ್ಮ ಪರವಾಗಿ
ನಮ್ಮ ಕುಲ ಮನೆಗಳಿಗೆ ಹೊರಗಾಗಿ ಬಂದಿಹಳು ನಿಮ್ಮ ಕುಲವನು ಬೆಳಸೆ ಬಂದಿರುವಳು

ನಿನ್ನ ಮಡದಿಯ ಕೊಂಡು ಸುಖವಾಗಿರವ್ ಮಗುವೆ ನಿಮ್ಮ ಸೊಸೆ ಸೋದರಿಯು ಕೊಳ್ಳಿರಿವಳ
ನಿಮ್ಮ ಕೀರುತಿ ಬೆಳೆಯಲಿ ಇವಳ ಸೌಜನ್ಯದಲಿ ನಿಮ್ಮ ಕುಲಶೀಲಗಳು ಪರಿಮಳಿಸಲಿ

ಹೆತ್ತಮನೆಗಿಂದು ಹೊರಗಾದೆ ನೀ ಮಗಳೆ ಈ ಮನೆಯೇ ಈ ಇವರೆ ನಿನ್ನವರು ಮುಂದೆ
ಇವರೆ ತಾಯ್ಗಳು ಸಖರು ಭಾಗ್ಯವನು ಬೆಳಸುವರು ಇವರ ದೇವರೆ ನಿನ್ನ ದೇವರುಗಳು

ನಿಲ್ಲು ಕಣ್ಣರೊಸಿಕೊಳು ನಿಲ್ಲು ತಾಯ್ ಹೋಗುವೆವು ತಾಯಿರ ತಂದೆಯಿರ ಕೊಳ್ಳಿರಿವಳ
ಎರಡು ಮನೆಗಳ ಹೆಸರು ಖ್ಯಾತಿ ಉಳಿವಂತೆ ತುಂಬಿದಾಯುಶ್ಯದಲಿ ಬಾಳಿ ಬದುಕು





- ಕಠಾರಿ ವೀರ

Wednesday, April 28, 2010

ಜೀವನದ ಅಮೂಲ್ಯ ಪಾಠ - ಸಮತೋಲನ

ನಾನು ಈ ಕವಿತೆ ಬರೆದು ಸುಮಾರು ೫ (5) ವರುಷ ಕಳೆದಿದೆ! ನಿರಾಶಾವಾದಿಗಳಿಗೆ ಮತ್ತು ದೇವದಾಸರಿಗೆ ಒಬ್ಬ ಭಗ್ನ ಪ್ರೇಮಿಯ ಸಂದೇಶ!

*******************************************

ಏಕೋ ಮನವು ಇಂದು ಚಂಚಲಗೊಂಡಿದೆ
ಏನೋ ಬರೆಯಲು ಕಾತುರದಿಂದಿದೆ

ಮರೆಯಲು ಯತ್ನಿಸುತ್ತಿರುವೆ ನಿನ್ನಯ ರೂಪ
ಮಾಡಿಕೊಂಡೆ ಪರಮಾತ್ಮನಲ್ಲಿ ನಾನಾ ಬಿನ್ನಪ

ನೆನಪಿನಂಗಳದಿ ನಲಿಯುವುದು ನಿನ್ನಯ ಕಿರುನಗೆ
ಆ ಸುಂದರ ವಾದನ ಆ ಚೆಲುವಾದ ಬಗೆ

ಮಣ್ಣಾಯಿತು ನಾ ಕಟ್ಟಿದ ಕನಸಿನ ಮಂದಿರ
ಒಡೆಯಿತು ನಾ ನಿರ್ಮಿಸಿದ ಗಾಳಿ ಗೋಪುರ

ಅನಿಸಿತು ನನಗೆ ಇದೆಂತಹ ವಿಪರ್ಯಾಸ
ಹೀಗೂ ಇರುವುದೇ ವಿಧಿಯ ಪರಿಹಾಸ

ಕಲಿತೆ ಅವಳಿಂದ ಒಂದು ಅಮೂಲ್ಯ ಪಾಠ
ಬದುಕಲ್ಲ ಹಗುರವಾಗಿ ತಗೆದುಕೊಳ್ಳುವ ಆಟ

ಸಮತೋಲನದ ಬದುಕೇ ಸುಖ ಬಾಳಿನ ರಹಸ್ಯ
ಇರಬೇಕು ಜೀವನದಲಿ ಸದಾ ಸಾಮರಸ್ಯ!


- ಕಠಾರಿವೀರ

*******************************************

ಜೀವನದಲ್ಲಿ ಬಹಳಷ್ಟು ಜನ ಈ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಕೆಲವರು ಈ ಆಘಾತವನ್ನು ಸಹಿಸಿಕೊಂಡು, ಅದರಿಂದ ಹೊರಬಂದು, ಪ್ರೇಯಸಿ (ಅಥವಾ ಪ್ರೇಮಿ) ಮತ್ತು ಪ್ರೀತಿಯಷ್ಟೇ ಬದುಕಲ್ಲ, ಇನ್ನು ಬಹಳಷ್ಟಿದೆ ಅಂತ ಅರಿತು ತಮ್ಮ ಜೀವನವನ್ನು ಸಹಜವಾಗಿ ಮತ್ತು ಸುಂದರವಾಗಿ ರೂಪಿಸಿಕೊಳ್ಳುತ್ತಾರೆ. ಆದರೆ, ಇನ್ನೂ ಕೆಲವರಿಗೆ ಈ ಆಘಾತದಿಂದ ಮನಸ್ಸಿನ ಸಮತೋಲನ ಹಾಗು ನೆಮ್ಮದಿಗಳನ್ನು ಕಳೆದುಕೊಂಡು, ದೇವದಾಸ್ ನನ್ನು ತಮ್ಮ ನಿದರ್ಶನವಾಗಿಟ್ಟುಕೊಂಡು ತಮ್ಮ ಬಾಳು ಹಾಗು ತಮ್ಮ ಜೊತೆಯವರ ಬಾಳು ಕಹಿಯಾಗಿ ಮಾಡಿಕೊಳ್ಳುತ್ತಾರೆ. ಅವರು ಹಾಗೆ ಮಾಡಿಕೊಳ್ಳದೆ ಸುಖ ದುಃಖಗಳನ್ನೂ ಆದಷ್ಟು ಸಮವಾಗಿ ತೆಗೆದುಕೊಂಡರೆ ಜೀವನ ಎಷ್ಟು ಸುಖಮಯವಲ್ಲವೇ?

Wednesday, February 03, 2010

ನಗು ಎಂದಿದೆ ಮಂಜಿನ ಬಿಂದು - ಸಾಹಿತ್ಯ

"ನಗು ಎಂದಿದೆ ಮಂಜಿನ ಬಿಂದು" - ಎಷ್ಟು ಸೊಗಸಾದ, ಸುಂದರವಾದ ಹಾಡು ಅರ್ಥಪೂರ್ಣ ಸಾಲುಗಳು! ಆರ್ ಎನ್ ಜಯಗೊಪಾಲ್ ರವರ ಸಾಹಿತ್ಯದ ಪರಮಾವಧಿಯೇ ಇದು ಅನಿಸುತ್ತದೆ! ಎಸ್ ಜಾನಕಿಯವರ ಕಂಠದ ಬಗ್ಗೆ ಹೇಳುವುದೇ ಬೇಡ! ಇಳಯರಾಜರ ಸಂಗೀತವು ಮಾಧುರ್ಯಪೂರ್ಣ! ಎಲ್ಲ ಸಂಗತಿಗಳು ಕೂಡಿ ಬಂದಾಗ ಹೊರಹೊಮ್ಮುವ ಅದ್ಭುತಕ್ಕೆ ಈ ಹಾಡೇ ಉತ್ತಮ ನಿದರ್ಶನ.

ಈ ಹಾಡಿನ ಸಾಹಿತ್ಯಕ್ಕಾಗಿ ನಾನು ಬಹಳ ದಿನಗಳಿಂದ ಹುಡುಕುತ್ತಿದೆ. ಈ ಅನ್ವೇಷಣೆ ಇವತ್ತು ಫಲಪ್ರದವಾಯಿತು, ಅನುರವರ ಕೃಪೆಯಿಂದ! ಅನು ಅವರೇ, ನಿಮಗೆ ನನ್ನ ಅನಂತ ಧನ್ಯವಾದಗಳು.

ಈ ಹಾಡಿನ ಸಾಹಿತ್ಯಕ್ಕೆ ಇಲ್ಲಿ ನೋಡಿ.

ಹಾಗೆ ಪಲ್ಲವಿ ಅನುಪಲ್ಲವಿ ಚಿತ್ರದ ಎಲ್ಲಾ ಹಾಡುಗಳ ಸಾಹಿತ್ಯಕ್ಕೆ ಈ ತಾಣ ವನ್ನು ನೋಡಿ.

ಈ ಹಾಡಿನ ಸಾಹಿತ್ಯಕ್ಕೆ ಹುಡುಕುವಾಗ ಅಕಸ್ಮಾತ್ತಾಗಿ ಆರ್ ಎನ್ ಜಯಗೊಪಾಲ್ ರವರ ಬ್ಲಾಗ್ ಸಿಕ್ಕಿತು! ಅವರ ಮಗನಾದ ರವಿ ಜಯಗೊಪಾಲ್ ರವರೆ ಈ ಬ್ಲಾಗ್ ನ ಸೂತ್ರಧಾರಿಗಳು! ಕೆಲವು ಅಪೂರ್ವ ಹಾಗು ಅಪರೂಪದ ವಿಷಯಗಳನ್ನು ತಿಳಿಸಿಕೊಡುವ ತಾಣ! ಅವರಿಗೂ ನನ್ನ ಕೃತಜ್ಞತೆಗಳು!

- ಕಠಾರಿವೀರ

Wednesday, January 28, 2009

ನನಗೆ ಇಷ್ಟವಾದ ಭಾವಗೀತೆಗಳ ಸಾಲುಗಳು!

ಭಾವಗೀತೆಗಳು ಏಕೆ ಅಷ್ಟು ಪ್ರಚಲಿತ ಹಾಗು ಪ್ರಸಿದ್ಧ ಎಂದು ಯೋಚನೆ ಮಾಡಿದಾಗ, ಅದರ ಕೆಲವು ಮುಖ್ಯ ಅಂಶಗಳು ನಮ್ಮ ಗಮನಕ್ಕೆ ಬರುತ್ತವೆ. ಅವೆನಪ್ಪ ಅಂದ್ರೆ: ಅದರ ಮಾಧುರ್ಯತೆ, ಅವುಗಳ ಸಾಹಿತ್ಯ, ಅವುಗಳ ಸಂಗೀತ ಮತ್ತು ಅವುಗಳಲ್ಲಿ ತುಂಬಿರುವ ಭಾವ! ಈ ಅಂಶಗಳಲ್ಲಿ ಯಾವುದಕ್ಕೆ ಪ್ರಾಶಸ್ತ್ಯ ಹೆಚ್ಚು ಯಾವುದಕ್ಕೆ ಕಮ್ಮಿ ಅಂತ ಹೇಳುವುದು ಕಷ್ಟಸಾಧ್ಯ.


ಆದರೆ, ನನಗೆ ಈ ಅಂಶಗಳಲ್ಲಿ ಯಾವುದು ಮುಖ್ಯ ಅಂತ ಕೇಳಿದರೆ, ನಾನು ಹೇಳುವುದು ಸಾಹಿತ್ಯ ಅಂತಲೇ. ಸಾಹಿತ್ಯದ ಅಡಿಪಾಯದ ಮೇಲೆ ಅಲ್ಲವೇ ಈ ಭಾವಗೀತೆಗಳು ತಮ್ಮ ಭವ್ಯವಾದ ಕಟ್ಟಡವನ್ನು ಕಟ್ಟಿರುವುದು.


ಕೆಲವು ಭಾವಗೀತೆಗಳಂತೂ ಕೇಳಿದ ತಕ್ಷಣವೇ ನಮ್ಮ ಮನಸನ್ನು ಕಲಿಕಿ ತಮ್ಮದೇ ಆದ ಛಾಪನ್ನು ಅವು ಬಿಟ್ಟು ಹೋಗುತ್ತವೆ! ಯಾವುದೋ ಒಂದು ಸಾಲು ನಮ್ಮ ಹೃದಯವೀಣೆಯನ್ನು ಮೀಟಿ ಅದೆಂತಹ ಅದ್ಭುತ ರಾಗವನ್ನು ಸೃಷ್ಟಿಸುತ್ತವೆಯೋ! ಈ ರೀತಿ ನನ್ನನ್ನು ಕಲುಕುವ ಕೆಲವು ಭಾವಗೀತಗಳ ಬಗ್ಗೆ ಬೇರೆಯಬೇಕೆಂಬ ಹಂಬಲ ಮತ್ತು ತವಕ.


೧. ಸಿ.ಅಶ್ವಥ್ ಅವರು ಹಾಡಿರುವ "ಮನಸೇ ನನ್ನ ಮನಸೇ" - ಈ ಭಾವಗೀತೆಯಂತು ಭಗ್ನ ಪ್ರೇಮಿಗಳಿಗೆ ಹೇಳಿ ಮಾಡಿಸಿರುವ ಹಾಗಿದೆ! ಬರೆದವರು ಯಾರು ಅಂತಸಹ ನಾನು ತಿಳಿಯೆ ಆದರೆ ಇದು ಮನ ಮುಟ್ಟುವ ತಟ್ಟುವ ಸರಳವಾದ ಗೀತ ಅಂತ ಮಾತ್ರ ಹೇಳಬಲ್ಲೆ! ಈ ಗೀತೆಯಲ್ಲಿ ನನಗೆ ಭಾಗಶಃ ಎಲ್ಲ ಸಾಲುಗಳು ಪ್ರಿಯವಾದುವೆ!


೨. ರತ್ನಮಾಲಾ ಪ್ರಕಾಶ್ ರವರು ಹಾಡಿರುವ " ಯಾವ ಮೋಹನ ಮುರಳಿ ಕರೆಯಿತೋ" - ಈ ಭಾವಗೀತೆಯನ್ನು ಬರೆದವರು ಶ್ರೀಯುತ ಗೋಪಾಲ ಕೃಷ್ಣ ಅಡಿಗರು. ಇದರಲ್ಲಿ ಬರುವ ಒಂದು ಸಾಲು ಹೀಗಿದೆ. ಈ ಸಾಲು ಬಹುಷಃ ಮಾನವನ ಪ್ರವೃತ್ತಿಯನ್ನು ಪ್ರತಿಬಿಂಬಿಸುವ ನಿಜಾಂಶವೇ! ಮನುಷ್ಯ ತನ್ನ ಬಳಿ ಅಷ್ಟೈಶ್ವರ್ಯಗಳೇ ಇರಲಿ, ತನ್ನಲ್ಲಿ ಏನು ಇಲ್ಲವೊ ಅದನ್ನು ಪದಯುವುದಕ್ಕೆ ಹಂಬಲಿಸುತ್ತಾನೆ! ಈ ನಿಜಾಂಶವನ್ನು ಬಹಳ ಸುಂದರ ಹಾಗು ಸರಳವಾಗಿ ಅಡಿಗರು ಹೇಳಿದ್ದಾರೆ.


"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ "

- ಕಠಾರಿವೀರ

Wednesday, July 26, 2006

Hesarillada kavite!

ನಾನು ಈ ಕವಿತೆ ಬರೆದದ್ದು ನನ್ನ ತಂದೆ ತಾಯಿಯವರಿಗೆ ಮಾಡುವೆಗೆ ಹುಡುಗಿ ಹುಡುಕಲು ನನ್ನ ಒಪ್ಪಿಗೆಯನ್ನು ಸೂಚಿಸಿದ ನಂತರ. ಒಂದು ರೀತಿಯ ಗೊಂದಲ ಮತ್ತು ಆತಂಕ ಎರಡೂ ಇದ್ದವು ಮನದಲ್ಲಿ. ಅದನ್ನೇ ನಾನು ಕವನ ಮುಖೇನ ನಿಮ್ಮ ಮುಂದಿಡ್ತಿದ್ದೇನೆ.

Maduve ChutukugaLu

ಈ ಚುಟುಕುಗಳನ್ನು ಬರೆದದ್ದು ಮದುವೆ ಆಗುವ ಮುನ್ನ ಆದರೆ ಮದುವೆ ಗೊತ್ತಾದಮೇಲೆ! ನನ್ನ ಭಾವಿ ಮಾಡದಿಯು ಹೇಗೆ ಸ್ಪಂದಿಸಿರಬಹುದೆಂಬ ವಿಷಯ ನಿಮ್ಮ ಊಹೆಗೆ ಬಿಟ್ಟಿದೇನೆ.



Gandhiyavarige nanna namana

ಈ ಕವನ ಗಾಂಧೀಜಿಯವರಿಗೆ ನನ್ನ ತೃಣ ಮಾತ್ರವಾದ ಸಮರ್ಪಣೆ.