Tuesday, October 25, 2011

"ಜನ್ಮ ದಿನದ ಶುಭಾಷಯ" - ಹೇಮಂತನಿಗೆ ಅರ್ಪಿತ

ನಾನು ನಮ್ಮ ಆಫೀಸಿಗೆ "ಕ್ಯಾಬ್" ನಲ್ಲಿ ಹೋಗ್ತೀನಿ. ನನ್ನ "ಕ್ಯಾಬ್" ಮಿತ್ರರಾದ ಹೇಮಂತು ಅವರ ಜನ್ಮದಿನಕ್ಕೆ ನಾನು ಈ ಕವನವನ್ನು ರಚಿಸಿದ್ದು.



ಜನ್ಮ ದಿನದ ಶುಭಾಷಯ

ಪ್ರೀತಿಯ ಹೇಮಂತು
ಕೇಳಿರಿ ನಮ್ಮಯ ಮನದ ತಂತು!

ಹಾರೈಸುವರು ಅರುಣಾ, ಕಿರಣ,
ತುಂಬಿರಲಿ ಬಾಳಲಿ ಹಸಿರು ತೋರಣ, ನಿತ್ಯ ಹೂರಣ!

ಹರಸುವನು ಪ್ರವೀಣ,
ಮೂಡಲಿ ಮನದಲಿ ನೂತನ ಚೇತನ!

ಹೇಳುವನು ಭರತ್,
ಸಂತಸದಿಂ ತುಂಬಿರಲಿ ನಿಮ್ಮ ಜಗತ್!

ಎನ್ನುವರು ಭಾವನಾ,
ಸದಾ ನಗುವು ಬೀರುತಿರಲಿ ನಿಮ್ಮಯ ವದನ!

ನುಡಿದರು ಮಧುರ,
ಬಾಳ ಪಯಣವಾಗಲಿ ಸುಲಲಿತ, ಸುಮಧುರ!

ಹರಸುವನು ರವಿ,
ಬದುಕಲಿ ತುಂಬಿರಲಿ ಸದಾ ಸವಿ!

ಹಾರೈಸುವನು ಶ್ರೀನಿವಾಸ,
ನಿಮ್ಮ ಬಾಳಲಿ ತುಂಬಿರಲಿ ಸಂತಸ, ಸಮರಸ!

ಹೇಳುವರು ಸುಮತಾ,
ಬರಲಿ ನಿಮಗೊಬ್ಬಳು ಮಡದಿ ಸುಸಂಸ್ಕೃತ!

ನುಡಿಯುವರು ಸುಷ್,
ಇರಲಿ ಸದಾ ನಿಮ್ಮ ದಿಲ್ ಖುಷ್!

-- ಇಂತಿ ನಿಮ್ಮ ಪ್ರೀತಿಯ
ರೂಟ್ ನಂ. ೧ ಕ್ಯಾಬಿನ ದುನಿಯಾ





- ಕಠಾರಿ ವೀರ


ವಸುಂಧರೆ - ಒಂದು ಕವನ

ವಸುಂಧರೆ

ವಸುಂಧರೆ, ಹೊರುವಳು ಜಗದ ಹೊರೆ
ತಾಯಾಗಿ ನೀಡುವಳು ಆಸರೆ
ಅಕ್ಕ ತಂಗಿಯಾಗಿ ಓಗೊಡುವಳು ನಮ್ಮಯ ಕರೆ


ಆಗುವಳು ಭಾವನೆಗಳ ಹಂಚಿಕೊಳ್ಳುವ ಸ್ನೇಹಿತೆ
ಬಾಳ ಸಂಗಾತಿಯಾಗಿ ನಡೆವಳು ಈ ವನಿತೆ


ಮಗಳಾಗಿ ಹೆಚ್ಚಿಸುವಳು ಹುಟ್ಟಿದ ಮನೆಯ ಕೀರ್ತಿ
ಸೊಸೆಯಾಗಿ ಬೆಳಗುವಳು ಮೆಟ್ಟಿದ ಮನೆಯ ಜ್ಯೋತಿ


ಎಲ್ಲಾ ಪಾತ್ರಗಳ ನಿಭಾಯಿಸಬಲ್ಲ ಶಕ್ತಿ
ಇರುವುದವಳಿಗೆ ಸಹಿಷ್ಣುತೆ, ಪಕ್ವತೆ ಮತ್ತು ಯುಕ್ತಿ
ಸಹನಶೀಲೆ ಶಾಂತ ಮೂರ್ತಿ ಎಂಬುದೇ ಲೋಕೋಕ್ತಿ


ಇವಳಲ್ಲಿ ಬೆರೆತಿರುವ ದೈವಾಂಶ
ಸಾರಿ ಹೇಳುತಿಹುದು ಈ ಪದ್ಯದ ಸಾರಾಂಶ!






- ಕಠಾರಿ ವೀರ

"ನಮ್ಮ ಮನೆ ಅಂಗಳದಿ" ಭಾವಗೀತೆಯ ಸಾಹಿತ್ಯ

ನಾನು ಈ ಕವನ/ಭಾವಗೀತೆನ ಬಹಳ ದಿನಗಳಿಂದ ಹುಡುಕ್ತಿದ್ದೆ. ಇಗೋ, ಇದರ ಸಾಹಿತ್ಯ ಹೀಗಿದೆ. ಇದರ ಸಾಹಿತಿಗಳು - ವೀಸೀ (ಅಂದರೆ ವೀ ಸೀತಾರಾಮಯ್ಯ ನವರು):

19-08-2012: ಈ ಕವನವು ಇನ್ನು ಒಂದು ತಾಣದಲ್ಲಿ ದೊರೆಯಿತು - ಅದಕ್ಕೆ ಇಲ್ಲಿ ಕ್ಲಿಕ್ಕಿಸಿ. kannadalyrics.com ಅವರಿಗೂ ನನ್ನ ಅನಂತ ಧನ್ಯವಾದಗಳು.

ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು

 
ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು
ಕೊಳ್ಳೀರೀ ಮಗುವನ್ನು ಎಮ್ಮ ಮನೆ ಬೆಳಕನ್ನು ನಿಮ್ಮ ಮನೆಯನ್ನು ತುಂಬಲೊಪ್ಪಿಸುವೆವು

ಮರೆಮೋಸ ಕೊಂಕುಗಳನರಿಯಳಿವಳು ಇನಿಸ ವಿಶ್ವಾಸವನು ಕಂಡರಿಯಳು
ಕಷ್ಟಗಳ ಸಹಿಸದೆಯೆ ಕಾಣದೆಯೇ ಬೆಳೆದವಳು ಸಲಹಿಕೊಳಿರಿಮಗಳ ಓಪ್ಪಿಸುವೆವು

ನಿಮಗಿವಳು ನೀಡುತಿಹ ಹಾಲು ಹಣ್ಣುಗಳ ಸವಿ ಎಂದೆದೂ ಅವಳ ನಡೆ ನಿಮ್ಮ ಪರವಾಗಿ
ನಮ್ಮ ಕುಲ ಮನೆಗಳಿಗೆ ಹೊರಗಾಗಿ ಬಂದಿಹಳು ನಿಮ್ಮ ಕುಲವನು ಬೆಳಸೆ ಬಂದಿರುವಳು

ನಿನ್ನ ಮಡದಿಯ ಕೊಂಡು ಸುಖವಾಗಿರವ್ ಮಗುವೆ ನಿಮ್ಮ ಸೊಸೆ ಸೋದರಿಯು ಕೊಳ್ಳಿರಿವಳ
ನಿಮ್ಮ ಕೀರುತಿ ಬೆಳೆಯಲಿ ಇವಳ ಸೌಜನ್ಯದಲಿ ನಿಮ್ಮ ಕುಲಶೀಲಗಳು ಪರಿಮಳಿಸಲಿ

ಹೆತ್ತಮನೆಗಿಂದು ಹೊರಗಾದೆ ನೀ ಮಗಳೆ ಈ ಮನೆಯೇ ಈ ಇವರೆ ನಿನ್ನವರು ಮುಂದೆ
ಇವರೆ ತಾಯ್ಗಳು ಸಖರು ಭಾಗ್ಯವನು ಬೆಳಸುವರು ಇವರ ದೇವರೆ ನಿನ್ನ ದೇವರುಗಳು

ನಿಲ್ಲು ಕಣ್ಣರೊಸಿಕೊಳು ನಿಲ್ಲು ತಾಯ್ ಹೋಗುವೆವು ತಾಯಿರ ತಂದೆಯಿರ ಕೊಳ್ಳಿರಿವಳ
ಎರಡು ಮನೆಗಳ ಹೆಸರು ಖ್ಯಾತಿ ಉಳಿವಂತೆ ತುಂಬಿದಾಯುಶ್ಯದಲಿ ಬಾಳಿ ಬದುಕು





- ಕಠಾರಿ ವೀರ