Showing posts with label ಸಾಲುಗಳು. Show all posts
Showing posts with label ಸಾಲುಗಳು. Show all posts

Wednesday, January 28, 2009

ನನಗೆ ಇಷ್ಟವಾದ ಭಾವಗೀತೆಗಳ ಸಾಲುಗಳು!

ಭಾವಗೀತೆಗಳು ಏಕೆ ಅಷ್ಟು ಪ್ರಚಲಿತ ಹಾಗು ಪ್ರಸಿದ್ಧ ಎಂದು ಯೋಚನೆ ಮಾಡಿದಾಗ, ಅದರ ಕೆಲವು ಮುಖ್ಯ ಅಂಶಗಳು ನಮ್ಮ ಗಮನಕ್ಕೆ ಬರುತ್ತವೆ. ಅವೆನಪ್ಪ ಅಂದ್ರೆ: ಅದರ ಮಾಧುರ್ಯತೆ, ಅವುಗಳ ಸಾಹಿತ್ಯ, ಅವುಗಳ ಸಂಗೀತ ಮತ್ತು ಅವುಗಳಲ್ಲಿ ತುಂಬಿರುವ ಭಾವ! ಈ ಅಂಶಗಳಲ್ಲಿ ಯಾವುದಕ್ಕೆ ಪ್ರಾಶಸ್ತ್ಯ ಹೆಚ್ಚು ಯಾವುದಕ್ಕೆ ಕಮ್ಮಿ ಅಂತ ಹೇಳುವುದು ಕಷ್ಟಸಾಧ್ಯ.


ಆದರೆ, ನನಗೆ ಈ ಅಂಶಗಳಲ್ಲಿ ಯಾವುದು ಮುಖ್ಯ ಅಂತ ಕೇಳಿದರೆ, ನಾನು ಹೇಳುವುದು ಸಾಹಿತ್ಯ ಅಂತಲೇ. ಸಾಹಿತ್ಯದ ಅಡಿಪಾಯದ ಮೇಲೆ ಅಲ್ಲವೇ ಈ ಭಾವಗೀತೆಗಳು ತಮ್ಮ ಭವ್ಯವಾದ ಕಟ್ಟಡವನ್ನು ಕಟ್ಟಿರುವುದು.


ಕೆಲವು ಭಾವಗೀತೆಗಳಂತೂ ಕೇಳಿದ ತಕ್ಷಣವೇ ನಮ್ಮ ಮನಸನ್ನು ಕಲಿಕಿ ತಮ್ಮದೇ ಆದ ಛಾಪನ್ನು ಅವು ಬಿಟ್ಟು ಹೋಗುತ್ತವೆ! ಯಾವುದೋ ಒಂದು ಸಾಲು ನಮ್ಮ ಹೃದಯವೀಣೆಯನ್ನು ಮೀಟಿ ಅದೆಂತಹ ಅದ್ಭುತ ರಾಗವನ್ನು ಸೃಷ್ಟಿಸುತ್ತವೆಯೋ! ಈ ರೀತಿ ನನ್ನನ್ನು ಕಲುಕುವ ಕೆಲವು ಭಾವಗೀತಗಳ ಬಗ್ಗೆ ಬೇರೆಯಬೇಕೆಂಬ ಹಂಬಲ ಮತ್ತು ತವಕ.


೧. ಸಿ.ಅಶ್ವಥ್ ಅವರು ಹಾಡಿರುವ "ಮನಸೇ ನನ್ನ ಮನಸೇ" - ಈ ಭಾವಗೀತೆಯಂತು ಭಗ್ನ ಪ್ರೇಮಿಗಳಿಗೆ ಹೇಳಿ ಮಾಡಿಸಿರುವ ಹಾಗಿದೆ! ಬರೆದವರು ಯಾರು ಅಂತಸಹ ನಾನು ತಿಳಿಯೆ ಆದರೆ ಇದು ಮನ ಮುಟ್ಟುವ ತಟ್ಟುವ ಸರಳವಾದ ಗೀತ ಅಂತ ಮಾತ್ರ ಹೇಳಬಲ್ಲೆ! ಈ ಗೀತೆಯಲ್ಲಿ ನನಗೆ ಭಾಗಶಃ ಎಲ್ಲ ಸಾಲುಗಳು ಪ್ರಿಯವಾದುವೆ!


೨. ರತ್ನಮಾಲಾ ಪ್ರಕಾಶ್ ರವರು ಹಾಡಿರುವ " ಯಾವ ಮೋಹನ ಮುರಳಿ ಕರೆಯಿತೋ" - ಈ ಭಾವಗೀತೆಯನ್ನು ಬರೆದವರು ಶ್ರೀಯುತ ಗೋಪಾಲ ಕೃಷ್ಣ ಅಡಿಗರು. ಇದರಲ್ಲಿ ಬರುವ ಒಂದು ಸಾಲು ಹೀಗಿದೆ. ಈ ಸಾಲು ಬಹುಷಃ ಮಾನವನ ಪ್ರವೃತ್ತಿಯನ್ನು ಪ್ರತಿಬಿಂಬಿಸುವ ನಿಜಾಂಶವೇ! ಮನುಷ್ಯ ತನ್ನ ಬಳಿ ಅಷ್ಟೈಶ್ವರ್ಯಗಳೇ ಇರಲಿ, ತನ್ನಲ್ಲಿ ಏನು ಇಲ್ಲವೊ ಅದನ್ನು ಪದಯುವುದಕ್ಕೆ ಹಂಬಲಿಸುತ್ತಾನೆ! ಈ ನಿಜಾಂಶವನ್ನು ಬಹಳ ಸುಂದರ ಹಾಗು ಸರಳವಾಗಿ ಅಡಿಗರು ಹೇಳಿದ್ದಾರೆ.


"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ "

- ಕಠಾರಿವೀರ