Showing posts with label ಭಾವಗೀತೆ. Show all posts
Showing posts with label ಭಾವಗೀತೆ. Show all posts

Tuesday, October 25, 2011

"ನಮ್ಮ ಮನೆ ಅಂಗಳದಿ" ಭಾವಗೀತೆಯ ಸಾಹಿತ್ಯ

ನಾನು ಈ ಕವನ/ಭಾವಗೀತೆನ ಬಹಳ ದಿನಗಳಿಂದ ಹುಡುಕ್ತಿದ್ದೆ. ಇಗೋ, ಇದರ ಸಾಹಿತ್ಯ ಹೀಗಿದೆ. ಇದರ ಸಾಹಿತಿಗಳು - ವೀಸೀ (ಅಂದರೆ ವೀ ಸೀತಾರಾಮಯ್ಯ ನವರು):

19-08-2012: ಈ ಕವನವು ಇನ್ನು ಒಂದು ತಾಣದಲ್ಲಿ ದೊರೆಯಿತು - ಅದಕ್ಕೆ ಇಲ್ಲಿ ಕ್ಲಿಕ್ಕಿಸಿ. kannadalyrics.com ಅವರಿಗೂ ನನ್ನ ಅನಂತ ಧನ್ಯವಾದಗಳು.

ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು

 
ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು
ಕೊಳ್ಳೀರೀ ಮಗುವನ್ನು ಎಮ್ಮ ಮನೆ ಬೆಳಕನ್ನು ನಿಮ್ಮ ಮನೆಯನ್ನು ತುಂಬಲೊಪ್ಪಿಸುವೆವು

ಮರೆಮೋಸ ಕೊಂಕುಗಳನರಿಯಳಿವಳು ಇನಿಸ ವಿಶ್ವಾಸವನು ಕಂಡರಿಯಳು
ಕಷ್ಟಗಳ ಸಹಿಸದೆಯೆ ಕಾಣದೆಯೇ ಬೆಳೆದವಳು ಸಲಹಿಕೊಳಿರಿಮಗಳ ಓಪ್ಪಿಸುವೆವು

ನಿಮಗಿವಳು ನೀಡುತಿಹ ಹಾಲು ಹಣ್ಣುಗಳ ಸವಿ ಎಂದೆದೂ ಅವಳ ನಡೆ ನಿಮ್ಮ ಪರವಾಗಿ
ನಮ್ಮ ಕುಲ ಮನೆಗಳಿಗೆ ಹೊರಗಾಗಿ ಬಂದಿಹಳು ನಿಮ್ಮ ಕುಲವನು ಬೆಳಸೆ ಬಂದಿರುವಳು

ನಿನ್ನ ಮಡದಿಯ ಕೊಂಡು ಸುಖವಾಗಿರವ್ ಮಗುವೆ ನಿಮ್ಮ ಸೊಸೆ ಸೋದರಿಯು ಕೊಳ್ಳಿರಿವಳ
ನಿಮ್ಮ ಕೀರುತಿ ಬೆಳೆಯಲಿ ಇವಳ ಸೌಜನ್ಯದಲಿ ನಿಮ್ಮ ಕುಲಶೀಲಗಳು ಪರಿಮಳಿಸಲಿ

ಹೆತ್ತಮನೆಗಿಂದು ಹೊರಗಾದೆ ನೀ ಮಗಳೆ ಈ ಮನೆಯೇ ಈ ಇವರೆ ನಿನ್ನವರು ಮುಂದೆ
ಇವರೆ ತಾಯ್ಗಳು ಸಖರು ಭಾಗ್ಯವನು ಬೆಳಸುವರು ಇವರ ದೇವರೆ ನಿನ್ನ ದೇವರುಗಳು

ನಿಲ್ಲು ಕಣ್ಣರೊಸಿಕೊಳು ನಿಲ್ಲು ತಾಯ್ ಹೋಗುವೆವು ತಾಯಿರ ತಂದೆಯಿರ ಕೊಳ್ಳಿರಿವಳ
ಎರಡು ಮನೆಗಳ ಹೆಸರು ಖ್ಯಾತಿ ಉಳಿವಂತೆ ತುಂಬಿದಾಯುಶ್ಯದಲಿ ಬಾಳಿ ಬದುಕು





- ಕಠಾರಿ ವೀರ

Wednesday, January 28, 2009

ನನಗೆ ಇಷ್ಟವಾದ ಭಾವಗೀತೆಗಳ ಸಾಲುಗಳು!

ಭಾವಗೀತೆಗಳು ಏಕೆ ಅಷ್ಟು ಪ್ರಚಲಿತ ಹಾಗು ಪ್ರಸಿದ್ಧ ಎಂದು ಯೋಚನೆ ಮಾಡಿದಾಗ, ಅದರ ಕೆಲವು ಮುಖ್ಯ ಅಂಶಗಳು ನಮ್ಮ ಗಮನಕ್ಕೆ ಬರುತ್ತವೆ. ಅವೆನಪ್ಪ ಅಂದ್ರೆ: ಅದರ ಮಾಧುರ್ಯತೆ, ಅವುಗಳ ಸಾಹಿತ್ಯ, ಅವುಗಳ ಸಂಗೀತ ಮತ್ತು ಅವುಗಳಲ್ಲಿ ತುಂಬಿರುವ ಭಾವ! ಈ ಅಂಶಗಳಲ್ಲಿ ಯಾವುದಕ್ಕೆ ಪ್ರಾಶಸ್ತ್ಯ ಹೆಚ್ಚು ಯಾವುದಕ್ಕೆ ಕಮ್ಮಿ ಅಂತ ಹೇಳುವುದು ಕಷ್ಟಸಾಧ್ಯ.


ಆದರೆ, ನನಗೆ ಈ ಅಂಶಗಳಲ್ಲಿ ಯಾವುದು ಮುಖ್ಯ ಅಂತ ಕೇಳಿದರೆ, ನಾನು ಹೇಳುವುದು ಸಾಹಿತ್ಯ ಅಂತಲೇ. ಸಾಹಿತ್ಯದ ಅಡಿಪಾಯದ ಮೇಲೆ ಅಲ್ಲವೇ ಈ ಭಾವಗೀತೆಗಳು ತಮ್ಮ ಭವ್ಯವಾದ ಕಟ್ಟಡವನ್ನು ಕಟ್ಟಿರುವುದು.


ಕೆಲವು ಭಾವಗೀತೆಗಳಂತೂ ಕೇಳಿದ ತಕ್ಷಣವೇ ನಮ್ಮ ಮನಸನ್ನು ಕಲಿಕಿ ತಮ್ಮದೇ ಆದ ಛಾಪನ್ನು ಅವು ಬಿಟ್ಟು ಹೋಗುತ್ತವೆ! ಯಾವುದೋ ಒಂದು ಸಾಲು ನಮ್ಮ ಹೃದಯವೀಣೆಯನ್ನು ಮೀಟಿ ಅದೆಂತಹ ಅದ್ಭುತ ರಾಗವನ್ನು ಸೃಷ್ಟಿಸುತ್ತವೆಯೋ! ಈ ರೀತಿ ನನ್ನನ್ನು ಕಲುಕುವ ಕೆಲವು ಭಾವಗೀತಗಳ ಬಗ್ಗೆ ಬೇರೆಯಬೇಕೆಂಬ ಹಂಬಲ ಮತ್ತು ತವಕ.


೧. ಸಿ.ಅಶ್ವಥ್ ಅವರು ಹಾಡಿರುವ "ಮನಸೇ ನನ್ನ ಮನಸೇ" - ಈ ಭಾವಗೀತೆಯಂತು ಭಗ್ನ ಪ್ರೇಮಿಗಳಿಗೆ ಹೇಳಿ ಮಾಡಿಸಿರುವ ಹಾಗಿದೆ! ಬರೆದವರು ಯಾರು ಅಂತಸಹ ನಾನು ತಿಳಿಯೆ ಆದರೆ ಇದು ಮನ ಮುಟ್ಟುವ ತಟ್ಟುವ ಸರಳವಾದ ಗೀತ ಅಂತ ಮಾತ್ರ ಹೇಳಬಲ್ಲೆ! ಈ ಗೀತೆಯಲ್ಲಿ ನನಗೆ ಭಾಗಶಃ ಎಲ್ಲ ಸಾಲುಗಳು ಪ್ರಿಯವಾದುವೆ!


೨. ರತ್ನಮಾಲಾ ಪ್ರಕಾಶ್ ರವರು ಹಾಡಿರುವ " ಯಾವ ಮೋಹನ ಮುರಳಿ ಕರೆಯಿತೋ" - ಈ ಭಾವಗೀತೆಯನ್ನು ಬರೆದವರು ಶ್ರೀಯುತ ಗೋಪಾಲ ಕೃಷ್ಣ ಅಡಿಗರು. ಇದರಲ್ಲಿ ಬರುವ ಒಂದು ಸಾಲು ಹೀಗಿದೆ. ಈ ಸಾಲು ಬಹುಷಃ ಮಾನವನ ಪ್ರವೃತ್ತಿಯನ್ನು ಪ್ರತಿಬಿಂಬಿಸುವ ನಿಜಾಂಶವೇ! ಮನುಷ್ಯ ತನ್ನ ಬಳಿ ಅಷ್ಟೈಶ್ವರ್ಯಗಳೇ ಇರಲಿ, ತನ್ನಲ್ಲಿ ಏನು ಇಲ್ಲವೊ ಅದನ್ನು ಪದಯುವುದಕ್ಕೆ ಹಂಬಲಿಸುತ್ತಾನೆ! ಈ ನಿಜಾಂಶವನ್ನು ಬಹಳ ಸುಂದರ ಹಾಗು ಸರಳವಾಗಿ ಅಡಿಗರು ಹೇಳಿದ್ದಾರೆ.


"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ "

- ಕಠಾರಿವೀರ